ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರದೊಂದಿಗೆ ಪರವಾನಿಗೆ ಅಥವಾ ನೊಂದಣಿ ಕಡ್ಡಾಯವಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ”ನಿಸಾರ್ ಫಾತೀಮಾ ತಿಳಿಸಿದರು.
ಆಲೂರು ತಾಲ್ಲೂಕಿನ ಮಗ್ಗೆ ರಾಯರಕೊಪ್ಪಲು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳ ಹಿಂದೆ ಪಾನಿಪೂರಿಯಲ್ಲಿ ಹುಳ ಕಂಡುಬಂದಿದ್ದು ಅಸುರಕ್ಷಿತ ಆಹಾರ ನೀಡುವುದು ಕಾನೂನು ಬಾಹಿರ. ಹಾಗಾಗಿ ಇಂದು ಬೇಟಿನೀಡಿ ಮಾದರಿ ಸಂಗ್ರಹಿಸಿ ನೋಟೀಸ್ ನೀಡಿದ್ದಾರೆ.
ಜೊತೆಗೆ ದಿನಸಿ ಅಂಗಡಿ,ಹೋಟೆಲ್.ಬೇಕರಿಗಳಿಗೆ ಸ್ವಚ್ಚತೆ ಹಾಗೂ ಗುಣಮಟ್ಟ ಕಾಯ್ದಿರಿಸುವಂತೆ ನೋಟಿಸ್ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಡಾ”ಸಾಗರ್.ಆಹಾರ ನೀರಿಕ್ಷಕರಾದ ಸತೀಶ್.ಮೋಹನ್.ಮಂಜು ಹಾಗೂ ಸಿಬ್ಬಂದಿಗಳಿದ್ದರು.
