ಸಕಲೇಶಪುರ ಬೆಳಗೋಡು ಬಾಗೆ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬವು ತುಂಬಾ ಮಳೆ ಹಾಗೂ ಗಾಳಿಯ ಒತ್ತಡದಿಂದ ಮುರಿದು ರಸ್ತೆಯ ಪಕ್ಕಕ್ಕೆ ವಾಲಿಕೊಂಡು ಸದ್ಯದಲ್ಲೇ ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ.
ಈ ವಿಚಾರದ ಬಗ್ಗೆ ಈಗಾಗಲೇ ವಿದ್ಯುತ್ ಇಲಾಖೆ ಗೆ ತಿಳಿಸಿದರು ಕೂಡ ಕಂಬವನ್ನು ಸರಿ ಪಡಿಸದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ.
ಈ ರಸ್ತೆಯು ರಾಜ್ಯ ಹೆದ್ದಾರಿ ಆಗಿರುವುದರಿಂದ ಪ್ರತಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ.
ಕಂಬ ಏನಾದ್ರೂ ಮುರಿದು ಬಿದ್ರೆ ತುಂಬಾ ದೊಡ್ಡ ಅನಾಹುತ ಆಗಲಿದೆ.
ಆದ್ದರಿಂದ ಆದಷ್ಟು ಬೇಗ ಇದನ್ನು ಸರಿ ಪಡಿಸದೆ ಇದ್ರೆ ಕರ್ನಾಟಕರಕ್ಷಣಾ ವೇದಿಕೆ ಯಿಂದ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ಬೆಳಗೋಡು ಘಟಕದ ಅಧ್ಯಕ್ಷರಾದ ರವೀಶ್ ತಿಳಿಸಿದ್ದಾರೆ

