Blog

ಮಾಗೇರಿ ರಸ್ತೆಯಲ್ಲಿ ರಸ್ತೆಗೆ ಮಣ್ಣು

ವರದಿ.
ನಾಗೇಶ್ ಎಂ ಎಚ್ ಮಾಗೇರಿ.

ಸಕಲೇಶಪುರ ಮಾಗೇರಿ ಸೋಮವಾರ ಪೇಟೆ ಮುಖ್ಯ ರಸ್ತೆಯಲ್ಲಿ
ಅವೈಜ್ಞಾನಿಕವಾಗಿ ರಸ್ತೆ ಬದಿ ಮಣ್ಣು ಸುರಿದಿರುವುದು


ಜನರಿಗೆ ಮತ್ತೆ ತೊಂದರೆ ಯಾಗದಂತೆ ಅಧಿಕಾರಿಗಳೇ ಎಚ್ಛೆತ್ತುಕೊಳ್ಳಿ

ಮಳೆ ಬಂದರೇ ರಸ್ತೆ ಕೆಸರು ಗದ್ದೆ ಆಗುವ ಸಾಧ್ಯತೆ!

ರಸ್ತೆ ಬದಿಗೆ ಅವೈಜ್ಞಾನಿಕ ವಾಗಿ ಮಣ್ಣು ಹಾಕಿರುವುದು
ಕಂಟ್ರಾಕ್ಟರ್ ಬೇಜವಾಬ್ದಾರಿ
ಎದ್ದು ಕಾಣುವಂತೆ ಮಾಡಿದೆ

ಹಾಸನ ಜಿಲ್ಲೆಯ ಗಡಿ ಭಾಗವಾದ ಮಾಗೇರಿ ಸೋಮವಾರ ಪೇಟೆ ರಸ್ತೆ ಯ  ಬದಿ ಯಲ್ಲಿ ಬೇಕಾಬಿಟ್ಟಿ ಮಣ್ಣು ತಂದು ಹಾಕಿದ್ದಾರೆ.


ಈ ಮಣ್ಣು ಹಾಕಿರುವುದರಿಂದ ರಸ್ತೆಯ ಅಕ್ಕ ಪಕ್ಕದ ಚರಂಡಿ ಮುಚ್ಚಿ ಹೋಗಿದೆ.
ಮಳೆ ನೀರು ಸರಿಯಾಗಿ ಹೋಗದ್ದಿದ್ದಾರೆ ಈ ಬಾರಿ ಮತ್ತೆ
ಅನಾಹುತ ಆಗುವ ಸಾಧ್ಯತೆ ಹೆಚ್ಚು.

ಕೊಡಗು ಮತ್ತು ಹಾಸನ ಗಡಿ ಭಾಗದ ಮಾಗೇರಿ ಸೋಮವಾರ ಪೇಟೆ ರಸ್ತೆ  ಕೊಡಗಿನ ಗಡಿಯಲ್ಲಿ ರಸ್ತೆ ಆಗಲಿ  ಮಾಡುವ ಸಂದರ್ಭದಲ್ಲಿ   ಹಾಸನ ಗಡಿ ಭಾಗದ ರಸ್ತೆ ಬದಿಯಲ್ಲಿ ಅವೈಜ್ಞಾನಿಕ ವಾಗಿ ಮಣ್ಣು ಸುರಿದ್ದಿದ್ದಾರೆ.

ಈ ರಸ್ತೆ 2018 ರ ಮಳೆಗೆ ಕೊಚ್ಚಿ ಹೋಗಿತ್ತು ಸುಮಾರು 500 ಮೀಟರ್ ರಸ್ತೆ ಯನ್ನೂ ಬದಲಿ ರಸ್ತೆ ಮಾಡಲಾಗಿತ್ತು.
ಜನರನ್ನು ಗಂಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು
ಮತ್ತೆ ಮರುಕಲಿಸುವ ಸಾಧ್ಯತೆ.

ನಮ್ಮ ಪಿ ಡಬ್ಲ್ಯೂ ಡಿ ಅಧಿಕಾರಿಗಳಿಗೆ ತಿಳಿದು ಸುಮ್ಮನಾದ್ದೀರಾ?

ತಿಳಿಯದೆ ಸುಮ್ಮನಿದ್ದರ ಅವರಿಂದಲೇ ತಿಳಿಯಬೇಕಿದೆ.

Related posts

ಡಾ. ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿ

Bimba Prakashana

ಹೊಂಕರವಳ್ಳಿ ನಿವಾಸಿ ಆಟೋ ಮಾಲಕ ವಿನು ನಿಧನ

Bimba Prakashana

ಹಾನು ಬಾಳು ಬಳಿ ಅಕ್ರಮ ಮರ ವಶಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More