ನಾರ್ವೆ ಗ್ರಾಮದ ಬೆಳೆಗಾರರು ಸಾಹಿತಿಗಳು ಹಾಗೂ ಸಂಶೋಧನೆಯಲ್ಲಿ ಆಸಕ್ತರೂ ಆಗಿದ್ದ ಎನ್ ಎಮ್ ರಾಜಶೇಖರ್ ಅಲ್ಪ ಕಾಲದ ಅನಾರೋಗ್ಯದ ನಂತರ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
(ದಿವಂಗತರು ನಾಡು ಪಟೇಲ್ ದಿ. ಎನ್ . ಬಿ . ಮಹಾಂತಗೌಡರ ದ್ವಿತೀಯ ಪುತ್ರ)
ಪಶ್ಚಿಮಘಟ್ಟಗಳ ಪರಿಸರ ಹಾಗೂ ಸ್ಥಳೀಯ ಇತಿಹಾಸದ ಕುರಿತು ಅಪಾರ ಕಾಳಜಿ ಹಾಗೂ ಅಭಿಮಾನ ಹೊಂದಿದ್ದ ದಿವಂಗತರು ಹಲವಾರು ಲೇಖನಗಳನ್ನು ಬರೆದು ಪೂರಕವಾದ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಸಂಜೆ 5 ಘಂಟೆ ಸುಮಾರಿಗೆ ನಾರ್ವೆ ಗ್ರಾಮದ ಮೂಲ ಮನೆಗೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬುಧವಾರ ಮಧ್ಯಾಹ್ನದ ನಂತರ ಅಂತ್ಯಕ್ರಿಯೆಯನ್ನು ನಾರ್ವೆ ಗ್ರಾಮದಲ್ಲಿ ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
