.
ಪ್ರೀವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೊರಟಿದ್ದ ವ್ಯಕ್ತಿ ಅಪಘಾತದಲ್ಲಿ ಮೃತ ಪಟ್ಟ ಘಟನೆ ಇಂದು ಸಕಲೇಶಪುರದ ಮೂಗಲಿಯಲ್ಲಿ ನಡೆದಿದೆ.
ಮನು.ಎಲ್.ಎನ್. (29) ಮೃತಪಟ್ಟ ಯುವಕನಾಗಿದ್ದಾನೆ.ಬೇಲೂರು ತಾಲ್ಲೂಕಿನ, ಲಕ್ಕುಂದ ಗ್ರಾಮದ, ದರ್ಬಾರ್ ಪೇಟೆಯ ನಿವಾಸಿ ಆಗಿದ್ದ ಮನು.ಎಲ್.ಎನ್.ಗೆ ಮೇ 10, 2026 ರಂದು ವಿವಾಹ ನಿಶ್ಚಿತ ಆಗಿತ್ತು
ಈ ಸಂತಸದ ಸಂದರ್ಭದಲ್ಲಿ ಪ್ರೀವೆಡ್ಡಿಂಗ್ ಶೂಟ್ಗೆ ವಧುವನ್ನು ಕರೆ ತರಲು ಮನು ಕಾರಿನಲ್ಲಿ ತೆರಳಿದ್ದ .
ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಆತ ಚಲಾಯಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.
