***ನಾಗೇಶ್ ಎಂ ಎಚ್ ಮಾಗೇರಿ *
🔴ಯಸಳೂರು ನಾಡಕಛೇರಿ*
*ಮೇಲಾಧಿಕಾರಿಗಳ ನಿರ್ಲಕ್ಷತನ*
ಸರ್ಕಾರದ ಆದೇಶ ಇದ್ದರು
ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ ಪೀಠಿಕೆ ಇಡದ ಅಧಿಕಾರಿ…
ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕೆ ಸಿಬ್ಬಂದಿಯ ಮೇಲೆ ಕೂಗಾಡಿದ ಉಪ ತಹಸೀಲ್ದಾರ್.
ಯಸಳೂರು ನಾಡಕಛೇರಿಯ ಅವ್ಯವಸ್ಥೆಯ ಬಗ್ಗೆ ದಿನಾಂಕ: 27-07-2026 ಮಂಗಳವಾರ ಕೆಲವು ಪತ್ರಿಕೆಗಳಲ್ಲಿ ವರದಿ ಮಾಡಲಾಗಿತ್ತು.
ಕಛೇರಿಯಲ್ಲಿ ಸಿಬ್ಬಂದಿಗಳು ಇಲ್ಲದೆ ಸಾರ್ವಜನಿಕರು ಕಛೇರಿ ಮತ್ತು ಮನೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಹಲವಾರು ವಿದ್ಯಾರ್ಥಿಗಳ, ಉದ್ಯೋಗಾಕಾಂಕ್ಷಿಗಳು ಜಾತಿ ಪ್ರಮಾಣ ಪತ್ರ ಸಿಗದೆ ಭವಿಷ್ಯದ ಕನಸನ್ನು ಬಿಡಬೇಕಾದ ಪರಿಸ್ಥಿತಿಯನ್ನು ಇಲಾಖೆಯ ಅಧಿಕಾರಿ ವರ್ಗ ನಿರ್ಮಿಸಿದ್ದಾರೆ.
ನೀವು ನನ್ನ ಕೇಳಿ ಬರೆಯಬೇಕು,
ಯಾರೋ ಹೇಳಿ ಮಾಡಿಸಿದ್ದಾರೆ
ನನ್ನ ಮನೆಯ ದುಡ್ಡು ಹಾಕಿ ಯುಪಿಎಸ್,ಪ್ರಿಂಟರ್ ತಂದು ಇಡಲಾ?
ನೀವು ಸರ್ಕಾರವನ್ನು ಕೇಳಿ
ಉತ್ತರಿಸುತ್ತಾರೆ.
ತಿಂಗಳುಗಳಿಂದ ಪ್ರಿಂಟರ್ ಇಲ್ಲದೆ ಸಾರ್ವಜನಿಕರನ್ನು ಗ್ರಾಮ ಒನ್, ಸೈಬರ್ ಸೆಂಟರ್ ಗೆ ಕಳಿಸುತ್ತಿರುವ ಅಧಿಕಾರಿಗಳು.
ಇದರ ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
previous post
