ಸಕಲೇಶಪುರದ ಕವನ ಕಾಫಿ ವರ್ಕ್ ಎಂಬ ಸಣ್ಣ ಉದ್ಯಮವು ಕಳೆದ 5 ಬಾರಿ ಕಳ್ಳತನಕ್ಕೆ ಒಳಗಾದ ಮಳಿಗೆಯಾಗಿದೆ.
ಈ ಮಳಿಗೆಯಲ್ಲಿ ಸಾಂಬಾರ್ ಉತ್ಪನ್ನ ಹಾಗೂ ಹಲವಾರು ವಿವಿಧ ರೀತಿಯಲ್ಲಿ ಸಾಮಗ್ರಿಗಳು ಮಾರಲ್ಪಡುತ್ತಿದೆ.
ಈ ಅಂಗಡಿಯಲ್ಲಿ 2023 ರಲ್ಲಿ ಒಂದು ಬಾರಿ ಕಳ್ಳತನ ಆಗಿ ಸುಮಾರು 2 ಲಕ್ಷ ಮೊತ್ತದ ಸಾಮಗ್ರಿ ಕಳ್ಳತನ ಆಗಿತ್ತು.
ಇದರ ಜೊತೆಗೆ 3 ಬಾರಿ ಹಂಚು ತೆಗೆದು ಕಳ್ಳತನ ಮಾಡಿದರೆ 2 ಬಾರಿ ಬೀಗ ಒಡೆದು ಕಳ್ಳತನ ಮಾಡಲಾಗಿದೆ.
ಈ ಕಳ್ಳತನದಿಂದಾಗಿ ಈ ಮಳಿಗೆಯ ಮಾಲಕ ಅಶೋಕ್ ರಿಗೆ ವ್ಯವಹಾರದಲ್ಲೇ ಬೇಸರ ಬಂದಂತೆ ಆಗಿದೆ.
ಇಲ್ಲಿ ಕಳ್ಳತನ ಮಾಡಿದ ಕಳ್ಳರು ಯಾರೆಂದು ಇನ್ನೂ ಕೂಡಾ ತಿಳಿದೇ ಇಲ್ಲ.
ಈಗ ಬೈ ಪಾಸ್ ಆದ ಬಳಿಕ ವಾಹನಗಳು ಬೈ ಪಾಸ್ ಮೂಲಕ ಸಾಗುತ್ತಿರುವುದರಿಂದ ಇವರಿಗೆ ವ್ಯವಹಾರ ಕೂಡಾ ಕಡಿತ ಆಗಿದ್ದು ಅವರ ಪರಿಸ್ಥಿತಿ ಕೂಡಾ ಸಮಸ್ಯೆಗೆ ಒಳಗಾಗಿದೆ.
previous post
next post
