ಈ ವ್ಯಕ್ತಿಯ ಹೆಸರು ರೇಣುಕ ಅಂತ ಇದ್ದು ಈ ವ್ಯಕ್ತಿಯು ಮೂಡಿಗೆರೆಯಲ್ಲಿ ಒಂದು ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಈ ದಿನ ಮೃತಪಟ್ಟಿರುತ್ತಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವನು ಬಾಳ್ಳುಪೇಟೆ ಸಮೀಪದ ಅಕ್ಕಪಕ್ಕದ ಯಾವುದೋ ಊರಿನವನಾಗಿದ್ದು ವಾರಸುದಾರರು ಪತ್ತೆಯಾಗಿರುವುದಿಲ್ಲ ಹಾಗಾಗಿ ಸಕಲೇಶಪುರದ ತಾಲ್ಲೂಕಿನಲ್ಲಿ ಈ ವ್ಯಕ್ತಿಯ ಸಂಬಂಧಿಕರು ಗೊತ್ತಿದ್ದರೆ ತಿಳಿಸುವಂತೆ ಪೊಲೀಸ್ ಪ್ರಕಟ ಣೆ ತಿಳಿಸಿದೆ.
