Blog

ಸಂಕಷ್ಟಕ್ಕೆ ಆಸರೆ ಆದ ಶಾಸಕರು

ವೇತನದ ಚೆಕ್ ವಿತರಿಸಿದ ಶಾಸಕ ಸಿಮೆಂಟ್ ಮಂಜು


ಆಲೂರು: ತಂದೆಯ ಅಕಾಲಿಕ ನಿಧನದಿಂದ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬದ ಯುವತಿಗೆ ತಾಲೂಕು ಆಸ್ಪತ್ರೆಯಲ್ಲಿ ಉದ್ಯೋಗ ಕಲ್ಪಿಸಿ, ಮೊದಲ ತಿಂಗಳ ವೇತನದ ಚೆಕ್ ಅನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು.


ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದ ನವೀದ್ ಪಾಷಾ ಅವರ ಪುತ್ರಿ ಜವೇರಿಯಾ ಅವರಿಗೆ ಶಾಸಕರು ವೇತನದ ಚೆಕ್ ಹಸ್ತಾಂತರಿಸಿದರು. ನವೀದ್ ಪಾಷಾ ಅವರು ಬಡ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದವರಾಗಿದ್ದು, ಅವರ ದಿಡೀರ್ ಸಾವಿನಿಂದ ಕುಟುಂಬ ಆರ್ಥಿಕವಾಗಿ ಕಂಗಾಲಾಗಿತ್ತು.


ಕುಟುಂಬದ ಪರಿಸ್ಥಿತಿಯನ್ನು ಮನಗಂಡು ಶಾಸಕ ಸಿಮೆಂಟ್ ಮಂಜು ಅವರ ಸೂಚನೆಯ ಮೇರೆಗೆ ನವೀದ್ ಪಾಷಾ ಅವರ ಪುತ್ರಿಗೆ ತಾಲೂಕು ಆಸ್ಪತ್ರೆಯಲ್ಲಿ ಉದ್ಯೋಗ ನೀಡಲಾಗಿತ್ತು. ಕೆಲಸಕ್ಕೆ ಸೇರಿದ ಒಂದು ತಿಂಗಳ ನಂತರ ಮೊದಲ ತಿಂಗಳ ವೇತನದ ಚೆಕ್ ಅನ್ನು ಶಾಸಕರಿಂದಲೇ ಪಡೆಯಬೇಕೆಂದು ಯುವತಿ ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಶಾಸಕರು ಸ್ವತಃ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Related posts

ಸಕಲೇಶಪುರದ 3 ಮಂದಿಗೆ ತಾಲೂಕು ಶಿಕ್ಷಕ ರತ್ನ ಪ್ರಶಸ್ತಿ

Bimba Prakashana

ಡಾ. ಬಿ ಆರ್. ಅಂಬೇಡ್ಕರ್ ವಸತಿ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

Bimba Prakashana

ಪಿ ಡಿ ಓ ಚಿನ್ನ ಸ್ವಾಮಿ ವರ್ಗಾವಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More