ಸಕಲೇಶಪುರದ ಅಗ್ರಹಾರ ಬಡಾವಣೆಯ ಶರತ್@ DJ ಎಂಬುವನು ಸಕಲೇಶಪುರದ N D ಅನುಷಾ ಜೊತೆ ಲಿವ್ ಇನ್ ಟುಗೆದರ್ ರಿಲೆಷನ್ಷಿಪ್ ಹೊಂದಿದ್ದು ಹಾಗಾಗಿ ಈಕೆಗೆ ಬೆಂಗಳೂರಿನ ಶೇಷಾದ್ರಿಪುರಂ ನಲ್ಲಿ ಬಾಡಿಗೆ ಮನೆ ಇಟ್ಟಿದ್ದ.
ದಿನಾಂಕ 13/06/2026 ರಂದು ರಾತ್ರಿ ಬೆಂಗಳೂರಿನಲ್ಲಿ ಅನುಷಾ ಳನ್ನು ಕೊಲೆಮಾಡಿ ನಂತರ ಪೊಲೀಸರ ದಿಕ್ಕು ತಪ್ಪಿಸಲು ಸಕಲೇಶಪುರಕ್ಕೆ ಬಂದು ಸುಮ್ಮನೆ ಓಡಾಡಿಕೊಂಡಿದ್ದ.
ಮಾಹಿತಿ ತಿಳಿದ ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಿ.ಸಿ.ವನರಾಜು ಸಿಬ್ಬಂದಿಗಳಾದ ಪೃಥ್ವಿ ಮತ್ತು ಮಧು ಇವರುಗಳ ಸಹಕಾರದೊಂದಿಗೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಪೊಲೀಸರು ಶರತ್ ನನ್ನು ತಡರಾತ್ರಿ ಇವನನ್ನು ಬಂಧಿಸಿರುತ್ತಾರೆ.
