ತಾಲ್ಲೂಕು ಆಯುಷ್ ಆಸ್ಪತ್ರೆ, ಸಕಲೇಶಪುರ, ಹಾಸನ ಜಿಲ್ಲೆ. ಇಲ್ಲಿ ಪ್ರತಿ ತಿಂಗಳ ಮೂರನೇ ಗುರುವಾರದಂದು ವಯೋವೃದ್ಧರಿಗೆ ವಯಸ್ಸಿನಲ್ಲಿ ಕಂಡುಬರುವ ಕೀಲುಗಳ ನೋವು, ಕೀಲುಗಳ ಉರಿಯೂತ, ಸೊಂಟದ ನೋವು, ಮಧುಮೇಹ, ರಕ್ತದೊತ್ತಡ, ಮಲಬದ್ಧತೆ ಹಾಗೂ ನಿದ್ರಾಹೀನತೆ ಮುಂತಾದ ಸಮಸ್ಯೆಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ತಜ್ಞ ವೈದ್ಯರಿಂದ ಹಮ್ಮಿಕೊಳ್ಳಲಾಗಿರುತ್ತದೆ. ಹಿರಿಯ ನಾಗರಿಕರು ಈ ಶಿಬಿರದ ಅವಕಾಶವನ್ನು ಸದ್ಉಪಯೋಗಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.
ದಿನಾಂಕ: 23-7-2026
ಸ್ಥಳ: ಸರ್ಕಾರಿ ಆಯುಷ್ ಆಸ್ಪತ್ರೆ ಸಕಲೇಶಪುರದಲ್ಲಿ
previous post
